"ಅಕ್ಷತ"ವಾದ ಪೃಥ್ವಿಯ ನಡುವಿನಲ್ಲಿ,
"ಚೈತ್ರ"ದ ಚಿಗುರಿನ ಕಂಪಿನ ಹೊನಲಿನಲ್ಲಿ..
ಸುಂದರ ಸ್ವಪ್ನಗಳಾ "ಶಿಲ್ಪ"ದ ಚಿತ್ತಾರದಲ್ಲಿ,
"ಶ್ರೆಯೂ"ಸ್ಸಿನ ಮೊರೆ ಹೊಕ್ಕ ಸ್ವಚ್ಛಂದದ ಬಾನಿನಲ್ಲಿ..!!
"ಅನಂತಾ"ನಂತ ಕಾನನಗಳ ನಡುವಿನಲ್ಲಿ,
"ಪ್ರಶಾಂತ"ತೆಯ ಚಿಗುರೊಡೆದಿತ್ತು ಸುಂದರ ಪ್ರಕೃತಿಯಲ್ಲಿ,
ಕಲರವ ಮಿಡಿಯುವ ಸ್ವರಗಳ ಮೀಟುವ..
"ಹೇಮಾ"ಂಕುರದಲ್ಲಿ..
ಬಿನ್ನಾಣದಿ "ಅಭಯ" ಹಸ್ತ ನೀಡುತ ಮುದ ತಂದಿತು,
ಮನಕೆ ಶುಭ ಗಳಿಗೆಯಲ್ಲಿ..!!
ಸು"ಮಧು"ರ ಕಂಠದಿ ಮೈಮನ ಮರೆಸುವ,
"ಕನ್ನಿಕೆ"ಯರ ಮನದನ್ನೆಯಲ್ಲಿ..
ತಾ ಮುಂದು ಎನ್ನುವ ನೀ "ಸೈ ಫ಼"ಕ್ವತೆಯ ಬುತ್ತಿಯ ಬಿತ್ತುತ,
ನೀಲಾಕಾಶದಿ "ಕಿರಣ"ಗಳ ಸೊಬಗಿನಲಿ ತಾ ಒಂದಾಗುತ.,
ಸುಪ್ತದಲಿ "ನಾಗರಜ"ನ ಸ್ಮರಿಸುತ ಸ್ತಬ್ದದಲಿ,
ಸ್ವರಗಳ ತಾ ಮಿಡಿಯುತ..!!
ರಾರಾಜಿಸುವ ಸವ್ಯ"ಸಾಚಿ ನ"ಯ ಗುಣಗಳ ಹಂದರದಲಿ..
"ರಾಜೇಶ" ಗುಣಗಳ ಮೊಳಗುತ..
"ಇತೇಷ"ಂ ಎಲ್ಲರೊಳೊಂದಾಗಿ ಬೆರೆಯುತ..
"ಶಿವಾನಂದ"ರ ನೇತೃತ್ವದಿ ನಮ್ಮೆಲ್ಲರ ಬಾಳು,
ಹಚ್ಚ ಹಸಿರಿನ ನಂದನವನವಾಗಲಿ.!
ಸದಾ ಸಂತೋಷದಿ ಸಾಗಲೆಂದು ನಲ್ಮೆಯಲಿ ಹರಸುತಾ..
ಭಾವದಲಿ ಭ್ರಮಿಸುತ.. ಸ್ನೇಹದಲಿ ಸೆಳೆಯುತ..
ಸಾಗುತಾ..ಎಂದೆಂದಿಗೂ ನಗುತಾ ನಗು ನಗುತಾ..!!!
Subscribe to:
Post Comments (Atom)
No comments:
Post a Comment