ಕವಿಯ ಮನಸ್ಸಿನಲಿ ಪದವಾದೆ ನೀನು,
ನಾಕಂಡ ಸ್ವಪ್ನಕ್ಕೆ ನೀರೆರೆದೆ ನೀನು,
ನಿನ್ನ ನಾಮಸ್ಮರಣೆಯಲಿ ಪ್ರತಿನಿತ್ಯ ನಾನು,
ನನ್ನಂತರಂಗದ ತುಂಬೆಲ್ಲ ನೀನು....!! ಬರಿನೀನು ... !!
ಕಾಲೇಜಿನ ಕ್ಯಾಂಟೀನಿನ ಬಳಿ ನಾನೋಡಿದೆ ನಿನನ್ನು..
ಸ್ತಬ್ಧವಾಯಿತು ಆ ಕ್ಷಣ ಮಂಕಾದೆ ನಾನು,
ಆ ನಿನ್ನ ಮುಂಗುರುಳು ಬಾಗಿ ಹಣೆಗೆ ಮುತ್ತಿಕ್ಕುತ್ತಿದ್ದರೆ..,
ನನಗೆ ತಿಳಿಯುತ್ತಿರಲಿಲ್ಲ ಕಾಫಿಗೆ ಹಾಕದಿದ್ದರೂ ಸಕ್ಕರೆ..!!
ಕಣ್ತುಂಬ ಕನಸು ತುಂಬ ನೀನೆ ತುಂಬಿರುವೆ.
ಬಾಯ್ತುಂಬ ಒಮ್ಮೆ ನಕ್ಕರೆ ನಿನ್ನಲ್ಲೆ ಒಂದಾಗಿ ಬಿಡುವೆ.,
ಮನದಲ್ಲೆ ಮನೆ ಮಾಡಿ ಹಚ್ಚೆ ಬರೆದಿರುವೆ..
ಸ್ವರದಲ್ಲ್ಲೆ ಸೊಗಸಾಗಿ ಮೋಡಿ ಮಾಡಿರುವೆ..!!
ನೀನನ್ನ ನೋಡದಿದ್ದರೂ ನಾ ನಿನ್ನನೇ ನೋಡುವೆ.,
ನೀ ನನ್ನತ್ತ ಜಾರದಿದ್ದರೂ ನಾ ನಿನ್ನಲ್ಲೆ ನೆಲೆಯೂರುವೆ,
ನೀ ನಸು ನಕ್ಕರೆ ನಾಕಾಣುವೆ ಸಾವಿರ ಕನಸು..
ನಿನ್ನಲೊಂದಾಗಲು ಹಾತೊರೆಯುತ್ತಿದೆ ಈ ಮನಸು..!!
ಮುಗ್ದ ಮನದ ಶುದ್ಧ ಪ್ರೀತಿಯ ನಾನೆರೆವೆ ನಿನಗಾಗಿ.,
ಭೋರ್ಗರೆವ ಭಾವತರಂಗಗಳ ಬಿಂಬಿಸುವೆ ಮನದಾಳದ ಸ್ವಚ್ಛಂದ ಪ್ರೀತಿಗಾಗಿ.
ನೆನಪುಗಳ ಬುತ್ತಿಯನು ಚಿತ್ತದಲಿ ತುತ್ತಿಡುವೆ ಸುಂದರ ಸ್ವಪ್ನಗಳ ಸವಿಯಾಗಿ..
ನಿನ್ನಾಳದಿ ನನ್ನೆಲ್ಲ ನೆನಹುಗಳ ಕುರುಹಿನೊಂದಿಗೆ ನನ್ನಲೊಂದಾಗು...
ನನ್ನ ಮನಸಿನೊಂದಿಗೆ.. ನನ್ನ ಮಾತಿನೊಂದಿಗೆ... ನನ್ನ ಭಾವದೊಂದಿಗೆ...!!
Tuesday, July 27, 2010
Tuesday, May 25, 2010
ಇಳೆಯ ಮಥನ..!!
"ಅಕ್ಷತ"ವಾದ ಪೃಥ್ವಿಯ ನಡುವಿನಲ್ಲಿ,
"ಚೈತ್ರ"ದ ಚಿಗುರಿನ ಕಂಪಿನ ಹೊನಲಿನಲ್ಲಿ..
ಸುಂದರ ಸ್ವಪ್ನಗಳಾ "ಶಿಲ್ಪ"ದ ಚಿತ್ತಾರದಲ್ಲಿ,
"ಶ್ರೆಯೂ"ಸ್ಸಿನ ಮೊರೆ ಹೊಕ್ಕ ಸ್ವಚ್ಛಂದದ ಬಾನಿನಲ್ಲಿ..!!
"ಅನಂತಾ"ನಂತ ಕಾನನಗಳ ನಡುವಿನಲ್ಲಿ,
"ಪ್ರಶಾಂತ"ತೆಯ ಚಿಗುರೊಡೆದಿತ್ತು ಸುಂದರ ಪ್ರಕೃತಿಯಲ್ಲಿ,
ಕಲರವ ಮಿಡಿಯುವ ಸ್ವರಗಳ ಮೀಟುವ..
"ಹೇಮಾ"ಂಕುರದಲ್ಲಿ..
ಬಿನ್ನಾಣದಿ "ಅಭಯ" ಹಸ್ತ ನೀಡುತ ಮುದ ತಂದಿತು,
ಮನಕೆ ಶುಭ ಗಳಿಗೆಯಲ್ಲಿ..!!
ಸು"ಮಧು"ರ ಕಂಠದಿ ಮೈಮನ ಮರೆಸುವ,
"ಕನ್ನಿಕೆ"ಯರ ಮನದನ್ನೆಯಲ್ಲಿ..
ತಾ ಮುಂದು ಎನ್ನುವ ನೀ "ಸೈ ಫ಼"ಕ್ವತೆಯ ಬುತ್ತಿಯ ಬಿತ್ತುತ,
ನೀಲಾಕಾಶದಿ "ಕಿರಣ"ಗಳ ಸೊಬಗಿನಲಿ ತಾ ಒಂದಾಗುತ.,
ಸುಪ್ತದಲಿ "ನಾಗರಜ"ನ ಸ್ಮರಿಸುತ ಸ್ತಬ್ದದಲಿ,
ಸ್ವರಗಳ ತಾ ಮಿಡಿಯುತ..!!
ರಾರಾಜಿಸುವ ಸವ್ಯ"ಸಾಚಿ ನ"ಯ ಗುಣಗಳ ಹಂದರದಲಿ..
"ರಾಜೇಶ" ಗುಣಗಳ ಮೊಳಗುತ..
"ಇತೇಷ"ಂ ಎಲ್ಲರೊಳೊಂದಾಗಿ ಬೆರೆಯುತ..
"ಶಿವಾನಂದ"ರ ನೇತೃತ್ವದಿ ನಮ್ಮೆಲ್ಲರ ಬಾಳು,
ಹಚ್ಚ ಹಸಿರಿನ ನಂದನವನವಾಗಲಿ.!
ಸದಾ ಸಂತೋಷದಿ ಸಾಗಲೆಂದು ನಲ್ಮೆಯಲಿ ಹರಸುತಾ..
ಭಾವದಲಿ ಭ್ರಮಿಸುತ.. ಸ್ನೇಹದಲಿ ಸೆಳೆಯುತ..
ಸಾಗುತಾ..ಎಂದೆಂದಿಗೂ ನಗುತಾ ನಗು ನಗುತಾ..!!!
"ಚೈತ್ರ"ದ ಚಿಗುರಿನ ಕಂಪಿನ ಹೊನಲಿನಲ್ಲಿ..
ಸುಂದರ ಸ್ವಪ್ನಗಳಾ "ಶಿಲ್ಪ"ದ ಚಿತ್ತಾರದಲ್ಲಿ,
"ಶ್ರೆಯೂ"ಸ್ಸಿನ ಮೊರೆ ಹೊಕ್ಕ ಸ್ವಚ್ಛಂದದ ಬಾನಿನಲ್ಲಿ..!!
"ಅನಂತಾ"ನಂತ ಕಾನನಗಳ ನಡುವಿನಲ್ಲಿ,
"ಪ್ರಶಾಂತ"ತೆಯ ಚಿಗುರೊಡೆದಿತ್ತು ಸುಂದರ ಪ್ರಕೃತಿಯಲ್ಲಿ,
ಕಲರವ ಮಿಡಿಯುವ ಸ್ವರಗಳ ಮೀಟುವ..
"ಹೇಮಾ"ಂಕುರದಲ್ಲಿ..
ಬಿನ್ನಾಣದಿ "ಅಭಯ" ಹಸ್ತ ನೀಡುತ ಮುದ ತಂದಿತು,
ಮನಕೆ ಶುಭ ಗಳಿಗೆಯಲ್ಲಿ..!!
ಸು"ಮಧು"ರ ಕಂಠದಿ ಮೈಮನ ಮರೆಸುವ,
"ಕನ್ನಿಕೆ"ಯರ ಮನದನ್ನೆಯಲ್ಲಿ..
ತಾ ಮುಂದು ಎನ್ನುವ ನೀ "ಸೈ ಫ಼"ಕ್ವತೆಯ ಬುತ್ತಿಯ ಬಿತ್ತುತ,
ನೀಲಾಕಾಶದಿ "ಕಿರಣ"ಗಳ ಸೊಬಗಿನಲಿ ತಾ ಒಂದಾಗುತ.,
ಸುಪ್ತದಲಿ "ನಾಗರಜ"ನ ಸ್ಮರಿಸುತ ಸ್ತಬ್ದದಲಿ,
ಸ್ವರಗಳ ತಾ ಮಿಡಿಯುತ..!!
ರಾರಾಜಿಸುವ ಸವ್ಯ"ಸಾಚಿ ನ"ಯ ಗುಣಗಳ ಹಂದರದಲಿ..
"ರಾಜೇಶ" ಗುಣಗಳ ಮೊಳಗುತ..
"ಇತೇಷ"ಂ ಎಲ್ಲರೊಳೊಂದಾಗಿ ಬೆರೆಯುತ..
"ಶಿವಾನಂದ"ರ ನೇತೃತ್ವದಿ ನಮ್ಮೆಲ್ಲರ ಬಾಳು,
ಹಚ್ಚ ಹಸಿರಿನ ನಂದನವನವಾಗಲಿ.!
ಸದಾ ಸಂತೋಷದಿ ಸಾಗಲೆಂದು ನಲ್ಮೆಯಲಿ ಹರಸುತಾ..
ಭಾವದಲಿ ಭ್ರಮಿಸುತ.. ಸ್ನೇಹದಲಿ ಸೆಳೆಯುತ..
ಸಾಗುತಾ..ಎಂದೆಂದಿಗೂ ನಗುತಾ ನಗು ನಗುತಾ..!!!
Subscribe to:
Posts (Atom)